Description
ವಿ. ತಿ. ಶೀಗೇಹಳ್ಳಿಯವರ ಲಂಬಾನುಮಾನ ಪ್ರವೃತ್ತಿ, ಅವರು ಆರಿಸಿಕೊಂಡ, ವಿಷಯದ್ದಲ್ಲ. ಅವರ ಸುತ್ತನೇಯ್ದುಕೊಳ್ಳುವ, ಅವರ ಊಹೆ, ಉತ್ಪ್ರೇಕ್ಷೆಗಳ ವೈಚಾರಿಕ ಆಶಯದ್ದು. ಕವಿ ವಿ. ತಿ. ಹೆಗಡೆಯವರಲ್ಲಿ ಶಬ್ದಸಂಪತ್ತು, ಅರ್ಥಗೌರವ, ಊಹೆಯ ನಿಖರತೆ, ಉಕ್ತಿಯ ಪ್ರಖರತೆ ತುಂಬ ಇವೆ. ವಾಗ್ಧೋರಣೆಯಲ್ಲಿ ಓಘವಿದೆ, ಓಜಸ್ಸಿದೆ.
-ಗೌರೀಶ ಕಾಯ್ಕಿಣಿ
“ರಕ್ಕಸ ಸಂಹಾರ” ಮುನ್ನುಡಿಯಲ್ಲಿ
ಸದಾ ಅಧ್ಯಯನ, ವೈಚಾರಿಕ, ಚಿಂತನಶೀಲ ಪ್ರವೃತ್ತಿ ಇವು ವ್ಯಕ್ತಿಯ ಪ್ರತಿಭೆ ಪ್ರಭಾವವನ್ನು ವಿಕಾಸಗೊಳಿಸುತ್ತವೆ. ಇದಕ್ಕೆ ಶ್ರೀ ವಿ. ತಿ. ಶೀಗೇಹಳ್ಳಿ ಅವರೇ ನಿದರ್ಶನ. ಶಿಕ್ಷಣ ಕಡಿಮೆ ಎನ್ನಿಸಿದರೂ ಓದಿದ್ದು ಹೆಚ್ಚು. ಅದರಲ್ಲೂ ಅಗತ್ಯವೆನ್ನಿಸಿದ್ದನ್ನು ಅರಗಿಸಿಕೊಂಡು ಅಭಿವ್ಯಕತಗೊಳಿಸಿದ್ದು ಇನ್ನಷ್ಟು. ದೊಡ್ಡ ವಿದ್ಯಾಲಯದ ಯಾವ ದೊಡ್ಡ ಪದವಿಯೂ ಅವರಿಗೆ ಇಲ್ಲದಿದ್ದರೂ ಅವರು ಯಾವ ಪದವೀಧರರಿಗೂ ಕಡಿಮೆ ಎನ್ನಿಸಿಲ್ಲ. ಯಾವುದೇ ವಿಷಯ, ವಿಚಾರ ಕೈಗೆತ್ತಿಕೊಂಡಾಗಲೂ ಅದರ ಸಮರ್ಪಕ ಅರಿವು ಮೂಡಿಸಿಕೊಳ್ಳುವ ಜಾಣ್ಮೆ, ಸಾಧಿಸಿಕೊಳ್ಳುವ ಛಲ ಇದೇ ಅವರ ಈವರೆಗಿನ ಗೆಲುವು-ಬಲದ ರಹಸ್ಯ.
ಒಂದಲ್ಲ ಹಲವು-ಹತ್ತು ರಂಗಗಳಲ್ಲಿ ಅವರದೇ ಒಂದು ವಿಶಿಷ್ಟ-ಶ್ರೇಷ್ಠ ಸಾಧನೆ, ಪರಂಪರೆ, ಸಾಹಿತ್ಯ, ಯಕ್ಷಗಾನ, ನಾಟಕ, ವಾಣಿಜ್ಯ, ಕಾವ್ಯ-ವಾಚನ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಶ್ರೀ ವಿ. ತಿ. ಶೀಗೇಹಳ್ಳಿ ಅವರ ಹೆಸರು ಕೃಷಿ, ಹಚ್ಚ-ಹಸಿರು.
-ತದ್ದಲಸೆ ವಿಘ್ನೇಶ್ವರ ಶರ್ಮಾ
‘ರಕ್ಕಸ ಸಂಹಾರ’ದ ಬೆನ್ನುಡಿಯಲ್ಲಿ
Reviews
There are no reviews yet.