Sold out!

ಬದ್ಧತೆ ಎನ್ನುವುದು ಬಂಧನ

Category: , , , , ,

360.00

Out Of Stock
Number of pages

202

Year of Publication

2024

Author

ಎಂ.ಎಸ್. ಶ್ರೀರಾಮ್

Publisher

ಬಹುವಚನ

Sold out!

Description

ಕೆ.ವಿ. ತಿರುಮಲೇಶ್ ಅವರ ಸಂದರ್ಶನಗಳ ಸಂಕಲನ

ಕನ್ನಡ ಸಾಹಿತ್ಯದಲ್ಲಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೇನೆ ನಿಜ – ಪ್ರಬಂಧಗಳು, ಲೇಖನಗಳು, ಸಾಹಿತ್ಯ ವಿಮರ್ಶೆ, ಜನಪ್ರಿಯ ವಿಜ್ಞಾನದ ಬಗ್ಗೆಯೂ ಬರೆದಿದ್ದೇನೆ. ನಾನು ತಿಂಗಳ, ವಾರದ ಅಂಕಣಗಳನ್ನು ಬರೆದೆ, ಕಥೆ, ಕಿರುಕಾದಂಬರಿಗಳು ಮತ್ತು ನೀವು ಹೇಳಿದಂತೆ ಇತ್ತೀಚೆಗೆ ಒಂದು ನಾಟಕವನ್ನೂ ಬರೆದೆ. ಆದರೆ ಈ ಎಲ್ಲದರಲ್ಲೂ ನನಗೆ ತುಂಬಾ ಸಂತೋಷವನ್ನು ನೀಡಿದ ಕೆಲಸವೆಂದರೆ ಪದ್ಯ ಬರೆಯುವುದು. ಆದರೆ ಕಾವ್ಯರಚನೆ ಆತಂಕದ ಕೆಲಸವೂ ಹೌದು. ಇದು ನಮ್ಮ ಆಂತರ್ಯವನ್ನು ಬಗೆಯುವ ಕೆಲಸ. ಇದು ಸೂಕ್ಷ್ಮ – ಸಂವೇದನಾಶೀಲ ಕೆಲಸ. ನಾನು ಅತ್ಯುತ್ತಮ ಕವಿತೆಗಳನ್ನು ಬರೆಯಬೇಕೆಂದು ಬಯಸುತ್ತೇನೆ. ಹಾಗೂ ಬರೆದದ್ದನ್ನು ಇತರರಿಗೆ ತೋರಿಸಲು ನನಗೆ ತುಂಬಾ ಸಂಕೋಚವೂ ಆಗುತ್ತದೆ!

***

ನಾನು ಕಂಡುಕೊಂಡ ವಿಷಯವೊಂದನ್ನು ಹೇಳ್ತೇನೆ ನಿಮಗೆ, ಈ ವಾಟ್ಸಾಪ್ ಗ್ರೂಪ್ಸ್, ಫೇಸ್ಬುಕ್ ಅದೆಲ್ಲಾ ಇದೆಯಲ್ಲ – ಅದರ ಪರಿಣಾಮ ಒಳ್ಳೇದೋ, ಕೆಟ್ಟದೋ, ಅಂತ ಹೇಳೋಕೆ ಆಗಲ್ಲ. ಅದೊಂದು ಸಮಸ್ಯೆ. ನಮ್ಮ ಉತ್ತರ ಏನೇ ಇದ್ರೂ, ಇದೆಲ್ಲಾ ಇರೋದಂತೂ ಇದೆ, ಮುಂದೆ continue ಕೂಡಾ ಆಗಬಹುದು. ಏನಾಗುತ್ತೆ ಅಂದ್ರೆ. ನಾನು ಕೇಳಿದ ಪ್ರಕಾರ (ನಾನು ಇಂಥಾ ಯಾವ ಗ್ರೂಪಿಗೂ ಸೇರಿಲ್ಲ!), ಕೆಲವರಿಗೆ ಹಠ ಇರುತ್ತೆ, ದಿನಕ್ಕೆ ಹತ್ತು ಕವಿತೆಗಳನ್ನ ಬರೆದು ಅಪ್ಲೋಡ್ ಮಾಡಬೇಕಂತ. ಹೀಗೆ ಮಾಡಿ ಮಾಡಿ ಕವಿತೆಯ ಉಬ್ಬರ ಜಾಸ್ತಿ ಆಗಿಬಿಟ್ಟು ಅದರ ಕ್ವಾಲಿಟಿ ಕಡಿಮೆಯಾಗಿದೆಯೇನೋ ಅಂತ ನನಗೆ ಅನಿಸುತ್ತೆ. ಹಾಗೆ ಆಗುವ ಸಾಧ್ಯತೆ ಜಾಸ್ತಿ. ಮತ್ತೆ ಎಲ್ಲರೂ ಲೈಕ್ ಮಾಡಬೇಕಲ್ಲ. ಪರಸ್ಪರ ಭಾವ ಎಂದ ಹಾಗೆ, ನಿಮ್ಮ ಕವಿತೆಗೆ ನಾನು ಲೈಕ್ ಮಾಡಬೇಕು, ನನ್ನ ಕವಿತೆಗೆ ನೀವು ಲೈಕ್ ಚಿಹ್ನೆ ಒತ್ತಬೇಕು. It becomes an obligation. ಅಲ್ಲಿ ಅಪ್ರಮಾಣಿಕತೆ ಜಾಸ್ತಿ ಆಗುತ್ತೆ. ಈ phenomenon ನಡೀತಾ ಇದೆ ಈಗ.

ಕೆ.ವಿ. ತಿರುಮಲೇಶ್

Reviews

There are no reviews yet.

Be the first to review “ಬದ್ಧತೆ ಎನ್ನುವುದು ಬಂಧನ”

Your email address will not be published. Required fields are marked *

M.S. Sriram

ಎಂ ಎಸ್ ಶ್ರೀರಾಮ್ ಹುಟ್ಟಿದ್ದು ೧೯೬೨ರಲ್ಲಿ, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ. ಉಡುಪಿ, ಬೆಂಗಳೂರು, ಮೈಸೂರು, ಆಣಂದದಲ್ಲಿ ವ್ಯಾಸಂಗ. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಿಂದ ಡಾಕ್ಟರೇಟ್ ಪಡೆದ ಮೇಲೆ ಆಣಂದದ ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟಿನಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಲ್ಲಿ ಪ್ರೊಫೆಸರ್ ಕೆಲಸ ನಿರ್ವಹಿಸಿದ್ದಾರೆ. ಈಗ ಬೆಂಗಳೂರಿನ ಐಐಎಂನಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ನೀತಿ ಕೇಂದ್ರದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮ್ ಅವರ ಸಲ್ಮಾನ್ ಖಾನನ ಡಿಫಿಕಲ್ಟೀಸು (ಅಂಕಿತ ಪುಸ್ತಕ) ಕಥಾಸಂಗ್ರಹಕ್ಕೆ ೨೦೧೪ರ ಮತ್ತು ಅರ್ಥಾರ್ಥ (ಅಕ್ಷರ ಪ್ರಕಾಶನ) ಪ್ರಬಂಧಗಳ ಸಂಗ್ರಹಕ್ಕೆ ೨೦೧೫ರ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ. ಇದಲ್ಲದೇ ಅವರವರ ಸತ್ಯ (ಸಪ್ನ ಬುಕ್ ಹೌಸ್), ತೇಲ್ ಮಾಲಿಶ್ (ಅಂಕಿತ ಪುಸ್ತಕ), ನಡೆಯಲಾರದ ದೂರ, ಹಿಡಿಯಲಾಗದ ಬಸ್ಸು (ಆಕೃತಿ ಪ್ರಕಾಶನ), ನಾನು ನಾನೇ? ನಾನು ನಾನೇ! (ಮನೋಹರ ಗ್ರಂಥಮಾಲಾ) ಎಂಬ ಕತೆಗಳ ಸಂಕಲನಗಳು, ಬೇಟೆಯಲ್ಲ ಆಟವೆಲ್ಲ ಎಂಬ ಕತಾ-ಕಾದಂಬರಿ (ಅಕ್ಷರ ಪ್ರಕಾಶನ), ಕನಸು ಕಟ್ಟುವ ಕಾಲ (ವಸಂತ ಪ್ರಕಾಶನ), ಶನಿವಾರ ಸಂತೆ (ಅಂಕಿತ ಪುಸ್ತಕ), ಕಥನ ಕುತೂಹಲ (ಅಕ್ಷರ ಪ್ರಕಾಶನ) ಎಂಬ ಪ್ರಬಂಧ ಸಂಕಲನಗಳು, ವೈ ವಿ ರೆಡ್ಡಿಯವರ ಜೀವನದ ಬಗ್ಗೆ ಬಂದ ಪುಸ್ತಕಗಳನ್ನಾಧರಿಸಿ ಬರೆದ ಭಿನ್ನ-ಅಭಿಪ್ರಾಯ (ಅಕ್ಷರ ಪ್ರಕಾಶನ) ಎನ್ನುವ ನಿರೂಪಣೆಯನ್ನೂ ಸೇರಿಸಿ, ಶ್ರೀರಾಮ್ ಒಟ್ಟು ಹನ್ನೆರಡು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಾಯಾದರ್ಪಣ ಅವರು ಬರೆದ ಕತೆಗಳ ಮೊದಲ ಸಂಕಲನ. ಇದಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ದೊರೆತಿದೆ.

More By The Author