Description
ಕನ್ನಡದ ಸುಪ್ರಸಿದ್ಧ ಲೇಖಕ ಎಚ್. ಎಸ್. ಶಿವಪ್ರಕಾಶ್ ಅವರ ಕಾವ್ಯದ ಆಸಕ್ತಿ ಬಹುಮುಖಿಯಾದದ್ದು. ಪ್ರಮಾಣ ಮತ್ತು ಗಾತ್ರಗಳೆರಡರಲ್ಲೂ ಅವರ ಬರಹಗಳಲ್ಲಿ ಕಾವ್ಯದ ಪಾಲೇ ಹೆಚ್ಚು. ಮಾತ್ರವೇ ಅಲ್ಲ, ಅವರು ಈಗಾಗಲೇ ಹಲವು ಭಾರತೀಯ ಮತ್ತು ವಿದೇಶಿ ಭಾಷೆಗಳಿಂದ ಕಾವ್ಯವನ್ನು ಕನ್ನಡೀಕರಿಸಿದ್ದಾರೆ; ಆಧುನಿಕಪೂರ್ವದ ಹಲವು ಮಹತ್ವದ ಕವಿಗಳ ಜತೆಗೆ ಅನುವಾದವೂ ಸೇರಿದಂತೆ ಬೇರೆಬೇರೆ ನೆಲೆಗಳ ಅನುಸಂದಾನ ನಡೆಸಿದ್ದಾರೆ. ಅವರ ಇಂಥ ಎಲ್ಲ ಪೂರ್ವಕಾರ್ಯಗಳ ಒಂದು ಮುಂದುವರಿಕೆಯೋ ಎಂಬಂತೆ ಆದಿಶಂಕರರದೆಂದು ಹೇಳಲಾಗುವ `ಸೌಂದರ್ಯಲಹರಿ’ ಪಠ್ಯವು ಅವರಿಂದ ಕನ್ನಡಕ್ಕೆ ಬರುತ್ತಿದೆ. ‘ಸೌಂದರ್ಯಲಹರಿ’ ಪಠ್ಯಕ್ಕೆ ಹಲವು ಆಯಾಮದ ಓದುಗಳು ಸಾಧ್ಯವಿದೆ – ಅದನ್ನು ಕಾವ್ಯಾಸ್ವಾದನೆಗಾಗಿ ಓದುವುದರಿಂದ ಆರಂಭಿಸಿ ತಾಂತ್ರಿಕ ಸಾಧನೆಯ ಮಾರ್ಗವಾಗಿ ಬಳಸುವವರೆಗೆ ಆ ನೆಲೆಗಳು ವಿಸ್ತರಿಸಿಕೊಂಡಿವೆ. ಶಿವಪ್ರಕಾಶರ ಪ್ರಸ್ತುತ ಅನುವಾದವು ಆ ಪಠ್ಯದ ಇಂಥ ನೆಲೆಗಳೆಲ್ಲವನ್ನೂ ಒಟ್ಟಯಿಸುವುದಕ್ಕೆ ಮಾಡಿರುವ ಒಂದು ಪ್ರಯೋಗ ಎಂಬಂತಿದೆ.





Reviews
There are no reviews yet.