
ದಿವ್ಯ
ಯು.ಆರ್. ಅನಂತಮೂರ್ತಿ
ದಿವ್ಯ ಎಂಬ ಶಬ್ದಕ್ಕೆ ಎರಡು ದಿಕ್ಕಿನ ಅರ್ಥದ ಛಾಯೆಗಳಿದ್ದಾವೆ. ಒಂದು, ಪಣ-ಪರೀಕ್ಷೆ ಇತ್ಯಾದಿ ಸಂಘರ್ಷವನ್ನು ಸೂಚಿಸುವಂಥದಾದರೆ ಇನ್ನೊಂದು ಅಲೌಕಿಕದ ಸಾಕ್ಷಾತ್ಕಾರವನ್ನು ಸೂಚಿಸುವಂಥದು. ಮೇಲ್ನೋಟಕ್ಕೆ ವಿರುದ್ಧವೆಂದು ಕಾಣಿಸಿಕೊಳ್ಳುವ ಈ ಎರಡು ಅರ್ಥವ್ಯಾಪ್ತಿಗಳು ಸಂಗಮಿಸುವ ಒಂದು ವಿಶೇಷ ಬಿಂದುವಿನಲ್ಲಿ ಅನಂತಮೂರ್ತಿಯವರ ಕಾದಂಬರಿ ‘ದಿವ್ಯ’ದ ಉಗಮವಾಗಿದೆ. ಹಾಗಂತ ಈ ಕಾದಂಬರಿಯಲ್ಲಿ ನಾವು ಎದುರಾಗುವ ಲೋಕವೇನೂ ಅಪೂರ್ವ-ಅಪರಿಚಿತವಾದದ್ದಲ್ಲ. ಅನಂತಮೂರ್ತಿ ಅವರ ಹಿಂದಿನ ಕಥನಗಳಲ್ಲಿ ಕಾಣಿಸಿಕೊಂಡ ಸ್ಥಳ-ಪಾತ್ರಸಮುಚ್ಚಯವೇ ಈ ಕಾದಂಬರಿಯಲ್ಲೂ ಇನ್ನೊಂದು ರೂಪದಲ್ಲಿ ಕಾಣಿಸಿಕೊಂಡಿದೆ. ಆದರೆ ಅದನ್ನು ನೋಡುತ್ತಿರುವ ರೀತಿ ಅಥವಾ ಅದನ್ನು ಕಥಿಸುತ್ತಿರುವ ಕ್ರಮ ಮಾತ್ರ ಹಿಂದೆಂದಿಗಿಂತ ವಿಶೇಷವಾದದ್ದು. ಹಿಂದೆ ಕೊಳೆತ ಕೆರೆಯಂತೆ ಕಂಡ ಸ್ಥಳ ಈಗ ನಿಗೂಢವಾದ ಸರಸ್ಸೂ ಇದ್ದೀತೆ ಎನಿಸುವಂತಿದೆ; ಹಿಂದೆ ಕೂಪಮಂಡೂಕಗಳಾಗಿ ಕಂಡ ವ್ಯಕ್ತಿಗಳು ಈಗ ಧ್ಯಾನಸ್ಥ ಋಷಿಗಳೂ ಆಗಿರಬಹುದೆ ಎಂಬ ಅನುಮಾನವನ್ನು ಈ ಕಥನ ಉದ್ದೀಪಿಸುವಂತಿದೆ. ಹಾಗಾಗಿ ಇದೊಂದು ಹಳೆಯ ಲೋಕದ ಹೊಸ ಸೃಷ್ಟಿ. ಅಥವಾ ಏಲಿಯಟ್ ತನ್ನ ಒಂದು ಪದ್ಯದ ಸಾಲಿನಲ್ಲಿ ಹೇಳಿರುವುದನ್ನು ಗದ್ಯದಲ್ಲಿ ಉಲ್ಲೇಖಿಸುವುದಾದರೆ – ‘ಎಲ್ಲ ಆವಿಷ್ಕಾರಗಳೂ ಆತ್ಯಂತಿಕವಾಗಿ ಮುಟ್ಟುವುದು ಹೊರಟ ಸ್ಥಳಕ್ಕೇ, ಆದರೆ ಆ ಸ್ಥಳ ಮಾತ್ರ ಆಗ ಹೊಸತಾಗಿ ಆವಿಷ್ಕಾರಗೊಳ್ಳುತ್ತದೆ.’
ಬೆಲೆ ರೂ 220/-

ಶಂಕರ ವಿಹಾರ
ಅಕ್ಷರ ಕೆ.ವಿ.
ಆದಿಶಂಕರರನ್ನು ಕೇಂದ್ರದಲ್ಲಿಟ್ಟುಕೊಂಡು ಅದ್ವೈತ ಮತ್ತು ಬೇರೆ ಭಾರತೀಯ ದರ್ಶನಗಳ ಲೋಕದಲ್ಲಿ ನಡೆಸಿರುವ ಒಂದು ಮಾನಸಿಕ ಪ್ರವಾಸ ಕಥನ ಈ ಪುಸ್ತಕ. ಆದಿಶಂಕರರನ್ನು ಕುರಿತ ಆಧುನಿಕ ಕಾಲದ ಅಪಕಲ್ಪನೆಗಳ ಚಿತ್ರಗಳನ್ನೊಳಗೊಂಡ `ಶಂಕರ ವಿಕಲ್ಪ’ ಎಂಬ ಕಂಡಿಕೆಯೊಂದಿಗೆ ಈ ಕಥನವು ಆರಂಭವಾಗುತ್ತದೆ. ಆಮೇಲೆ, ಶಂಕರರ ಚಿಂತನೆಗಳಲ್ಲಿ ನಂಬಿಕೆಯ ಪಾಲೆಷ್ಟು, ವೈಚಾರಿಕತೆಯ ಪಾಲೆಷ್ಟು? ಅವರ ವೈಚಾರಿಕತೆ ಯಾವ ಬಗೆಯದು? – ಮೊದಲಾದ ಪ್ರಶ್ನೆಗಳು `ಶಂಕರ ವಿಚಾರ’ ಎಂಬ ಅಧ್ಯಾಯದಲ್ಲಿ ಚರ್ಚಿತವಾಗಿವೆ. `ಶಂಕರ ದರ್ಶನ’ ಎಂಬ ಭಾಗವು ಅದ್ವೈತ ಸಿದ್ಧಾಂತಕ್ಕೆ ಅಡಿಗಲ್ಲಾಗಿರುವ ಅದರ ಲೋಕಾಕೃತಿಯನ್ನು ಭಾರತದ ಬೇರೆಬೇರೆ ದರ್ಶನಗಳ ಸಂದರ್ಭದಲ್ಲಿಟ್ಟು ಅವಲೋಕಿಸುತ್ತದೆ. ಮತ್ತು ಅಂಥ ದರ್ಶನಕ್ಕೆ ತಲುಪಲು ಈ ಮಾರ್ಗವು ರೂಪಿಸಿಕೊಂಡ ತಾರ್ಕಿಕ-ವೈಧಾನಿಕ ಕ್ರಮಗಳನ್ನು `ಶಂಕರ ವಿಧಾನ’ ಎಂಬ ಭಾಗವು ಗುರುತಿಸುತ್ತದೆ. ಬಳಿಕ, `ಶಂಕರ ಸಂವಾದ’ವೆಂಬೊಂದು ಅಧ್ಯಾಯವು ಅದ್ವೈತಕ್ಕೂ ಬೇರೆ ದರ್ಶನಗಳಿಗೂ ನಡೆದ ಕೊಡುಕೊಳ್ಳುವಿಕೆಯನ್ನು ಗುರುತಿಸುವ ಜತೆಗೆ, ಈ ದಾರ್ಶನಿಕತೆಯು ಒಂದು ಧಾರ್ಮಿಕನಂಬಿಕೆಯಾಗಿ ಕೆಲಸ ಮಾಡುವ ದಾರಿಗಳನ್ನು ಗಮನಿಸಿದೆ. `ಶಂಕರ ಅನ್ವಯ’ ಎಂಬ ವಿಭಾಗವು ಕಾವ್ಯಮೀಮಾಂಸೆಯಲ್ಲಿ ಶಂಕರ ದರ್ಶನವು ಅನ್ವಯಗೊಳ್ಳುವ ಸ್ವಾರಸ್ಯವನ್ನು ನೋಡುವ ಪ್ರಯತ್ನ ಮಾಡಿದೆ. ಆ ಚಿಂತನೆಯು ತನ್ನ ಕಾಲದ ಸಮಾಜ-ಸಮುದಾಯಗಳೊಂದಿಗೆ ಕಟ್ಟಿಕೊಂಡ ಸಂಬಂಧಗಳೇನಿರಬಹುದು – ಎಂಬ ಊಹೆಯು `ಶಂಕರ ಸಮಾಜ’ದಲ್ಲಿ ಹರಡಿಕೊಂಡಿದೆ. ಶಂಕರರ ವೈಯಕ್ತಿಕ ಬದುಕು ಮತ್ತು ಅದರ ಬಗೆಗಿನ ಐತಿಹ್ಯಗಳೂ `ಶಂಕರ ಚರಿತೆ’ ಎಂಬ ಅಧ್ಯಾಯದಲ್ಲಿ ಕೂಡಿಕೊಂಡಿವೆ. ಕಡೆಯದಾಗಿ, ಇಂಥ ಹುಡುಕಾಟದಿಂದ ದೊರಕುವ ಕೆಲವು ಆಲೋಚನಾ ಪ್ರಸ್ಥಾನಗಳು ಹೇಗೆ ಸಮಕಾಲೀನ ಗ್ರಹಿಕೆಗಳಿಗೆ ಸಹಾಯಕ – ಎಂಬ ಚಿಕ್ಕ ತಪಶೀಲು `ಶಂಕರ ಸಂಧಾನ’ವೆಂಬ ಗುಚ್ಛದಲ್ಲಿ ಕೂಡಿದೆ.
ಬೆಲೆ ರೂ 220/-

ನಾಟ್ಯಶಾಸ್ತ್ರ
ಆದ್ಯ ರಂಗಾಚಾರ್ಯ
ಸುಮಾರಾಗಿ ಕ್ರಿಸ್ತಪೂರ್ವ ೨ ಮತ್ತು ಕ್ರಿಸ್ತಶಕ ೨ನೆಯ ಶತಮಾನಗಳ ನಡುವೆ ರಚಿತವಾಯಿತೆಂದು ನಂಬಲಾಗಿರುವ ‘ನಾಟ್ಯಶಾಸ್ತ್ರ’ವು ಭಾರತದ ರಂಗಸಂಪ್ರದಾಯಗಳೆಲ್ಲದಕ್ಕೂ ಆಕರಗ್ರಂಥವೆಂದೂ ಜಗತ್ತಿನಲ್ಲೇ ಮೊದಲಬಾರಿಗೆ ರಂಗಮಾಧ್ಯಮವನ್ನು ಶಾಸ್ತ್ರೀಯವಾಗಿ ಸೂತ್ರೀಕರಿಸಿದ ಮಹತ್ವದ ಕೋಶವೆಂದೂ ಪ್ರಸಿದ್ಧವಾಗಿದೆ. ಈ ಬೃಹತ್ ಕೋಶವು, ತನ್ನ ಮೂವತ್ತಾರು ಅಧ್ಯಾಯಗಳ ವ್ಯಾಪ್ತಿಯಲ್ಲಿ, ನಾಟ್ಯದ ಉಗಮದಿಂದ ಆರಂಭಿಸಿ ಅದರ ಉಪಯೋಗದವರೆಗೆ ರಂಗಮಾಧ್ಯಮದ ವಿವಿಧ ಆಯಾಮಗಳನ್ನು ಕುರಿತು ಪ್ರಸ್ತಾಪಿಸುತ್ತದೆ. ನಾಟ್ಯಮಂಟಪದ ಸ್ವರೂಪ ಮತ್ತು ನಿರ್ಮಾಣದಿಂದ ತೊಡಗಿ ಕಣ್ಣುಗುಡ್ಡೆಗಳ ಸೂಕ್ಷ್ಮಾತಿಸೂಕ್ಷ್ಮ ಅಭಿನಯಗಳವರೆಗೆ ಅಸಂಖ್ಯಾತ ವಿವರಗಳನ್ನು ಇಲ್ಲಿ ಸಿದ್ಧಾಂತೀಕರಿಸಿ ವರ್ಣಿಸಲಾಗಿದೆ. ಜತೆಗೆ, ಸಂಗೀತ-ಛಂದಸ್ಸು-ಕಾವ್ಯಮೀಮಾಂಸೆ ಮೊದಲಾದ ಹಲವು ಸಂಬಂಧಿತ ಕ್ಷೇತ್ರಗಳ ತುಂಬ ಉಪಯುಕ್ತವಾದ ಮಾಹಿತಿಗಳು ಕೂಡಾ ಇಲ್ಲಿ ಲಭ್ಯವಿವೆ. ಪ್ರಾಚೀನ ಭಾರತದ ಹಲವು ಕಲಾ ಪ್ರಕಾರಗಳ ವಿಶ್ವಕೋಶ ಎನ್ನಬಹುದಾದ ಈ ಬೃಹತ್ ಗ್ರಂಥವನ್ನು ಪ್ರಸ್ತುತ ಕನ್ನಡಾನುವಾದವು ವಿದ್ಯಾರ್ಥಿ-ವಿದ್ವಾಂಸರಿಬ್ಬರಿಗೂ ಉಪಯುಕ್ತವಾಗುವಂತೆ ಸರಳವಾಗಿ ಪುನರ್ನಿರೂಪಿಸುತ್ತದೆ.
ಬೆಲೆ ರೂ 640/-

ಪಿ. ಲಂಕೇಶ್ ಅವರ ಆಯ್ದ ಕಥೆಗಳು
ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ – ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.
ಬೆಲೆ ರೂ 120/-

ವಚನ ಪ್ರವೇಶ
ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ – ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.
ಬೆಲೆ ರೂ 120/-