Description
ಸಮಕಾಲೀನ ಕನ್ನಡ ಕವಯತ್ರಿಯರ ನಡುವೆ ವಿಭಿನ್ನವೂ ವಿಶಿಷ್ಟವೂ ಆದ ವ್ಯಕ್ತಿತ್ವವನ್ನುಳ್ಳ ಸವಿತಾ ಅವರ ಕವಿತೆ, ಬದುಕನ್ನು ಉತ್ಕಟವಾಗಿ ಪ್ರೀತಿಸುವ ಎಲ್ಲರ ಧ್ವನಿಯೂ ಆಗಿದೆ.
ಜಿ.ಎಸ್. ಶಿವರುದ್ರಪ್ಪ
ನಿಮ್ಮ ಪದ್ಯಗಳ ನಿರಾಡಂಬರ ಸರಳತೆ, ಅನಿರೀಕ್ಷಿತ ಬೆಳವಣಿಗೆ ಮತ್ತು ಕೆಲವೆಡೆಯಲ್ಲಿನ ಸಾರ್ಥಕ ಮುಕ್ತಾಯ ಇವೊತ್ತಿನ ಕವಿಗಳಿಗೆ ಪಾಠವಾಗುವಂಥದು. ಸ್ತ್ರೀವಾದಿತ್ವದ ಉರುಬಿನಲ್ಲಿ ಬದುಕಿನ ಅನೇಕಮುಖಿ ಅನುಭವಗಳಿಗೆ ನೀವು ಎರವಾಗದಿರುವುದು ಹಾಗೂ ಆ ಅನುಭವಗಳನ್ನು ಸಂವೇದನಾತ್ಮಕವಾಗಿ ಪಡೆಯಲು ಉತ್ಸುಕರಾಗಿರುವುದು ಶ್ಲಾಘನೀಯವೆನ್ನಿಸುತ್ತದೆ. ನಮ್ಮ ಕವಯತ್ರಿಯರಲ್ಲೇ ನಿಮಗೊಂದು ವಿಶಿಷ್ಟ ಸ್ಥಾನವಿರುವುದನ್ನು ನಿಮ್ಮ ಪದ್ಯಗಳ ಮೂಲಕ ನಾನು ಗುರುತಿಸಿದ್ದೇನೆ.
ಕೆ.ಎಸ್. ನಿಸಾರ್ ಅಹಮದ್
ನಿಮ್ಮ ಕವಿತೆಗಳೆಲ್ಲಾ ಮಧುರ ಧ್ವನಿಯವು. ‘ಜಾತ್ರೆಯಲ್ಲಿ ಶಿವ’ ನಿಮ್ಮೆಲ್ಲಾ ಹಿಂದಿನ ಕವಿತೆಗಳಿಗಿಂತ ಒಂದು ಹೆಜ್ಜೆ ಮುಂದಿದೆ. ಇದರ ಸರಳತೆ ಹಾಗೂ ತಿರುವುಗಳು ಬಹುಶಃ ನಿಮ್ಮ ಒಟ್ಟಾರೆ ಕಾವ್ಯದಲ್ಲೇ ವಿಶಿಷ್ಟವೆನಿಸುವಂಥವು.
ಕೆ.ವಿ. ತಿರುಮಲೇಶ್
ಸವಿತಾ ಕಾವ್ಯ ತಂಗಾಳಿಯಂತೆ…
ದೇವನೂರ ಮಹಾದೇವ
Reviews
There are no reviews yet.