Description
೧೨ನೆಯ ಶತಮಾನದ ಗುಜರಾತ್ ಪ್ರಾಂತ್ಯದಲ್ಲಿ ಬಾಳಿಬದುಕಿದ ರಾಮಚಂದ್ರ ಮತ್ತು ಗುಣಚಂದ್ರ ಎಂಬ ಜೈನ ಲೇಖಕರು ರಚಿಸಿದ ನಾಟಕ ಮೀಮಾಂಸೆ ಕುರಿತ ಗ್ರಂಥ ‘ನಾಟ್ಯದರ್ಪಣ’. ನಾಲ್ಕು ವಿವೇಕ – ಅಥವಾ ಅಧ್ಯಾಯ – ಗಳಲ್ಲಿ ವಿಭಜಿತವಾದ ಈ ಕೃತಿಯು ಸೂತ್ರ/ಕಾರಿಕೆಗಳ ರೂಪದಲ್ಲಿದೆ. ಭಾರತದ ರಂಗಸಂಪ್ರದಾಯಗಳ ಆದಿಮಗ್ರಂಥವಾಗಿರುವ ಭರತಮುನಿಯ ‘ನಾಟ್ಯಶಾಸ್ತ್ರ’ವನ್ನೇ ಅನುಸರಿಸಿ ಸಾಗುವ ಈ ಕೃತಿಯು ತನಗಿಂತ ತುಸು ಮೊದಲು ರಚಿತವಾದ ಇನ್ನೊಂದು ಪ್ರಸಿದ್ಧ ಮೀಮಾಂಸಾ ಕೃತಿ ಧನಂಜಯನ ‘ದಶರೂಪಕ’ವನ್ನೂ ಹೋಲುತ್ತದೆ. ಮಾತ್ರವಲ್ಲ, ಕೆಲವು ವಿದ್ವಾಂಸರ ಪ್ರಕಾರ, ಅದು ‘ದಶರೂಪಕ’ವನ್ನು ಮೀರಿಸಬೇಕೆಂಬ ಪೈಪೋಟಿಯಲ್ಲಿ ರಚಿತವಾಗಿರುವಂತೆಯೂ ತೋರುತ್ತದೆ. ಮುಖ್ಯವಾಗಿ ರಸಸ್ವರೂಪವನ್ನು ವಿವರಿಸುವಲ್ಲಿ ಈ ಕೃತಿಯು ಹಿಂದಿನ ಗ್ರಂಥಗಳಿಗಿಂತ ತುಸು ಭಿನ್ನ ನಿಲುವನ್ನು ತಾಳುತ್ತದೆಯೆಂದೂ ಅಧ್ಯಯನಕಾರರು ಗುರುತಿಸಿದ್ದಾರೆ. ಇದುವರೆಗೂ ಕನ್ನಡಕ್ಕೆ ಅನುವಾದಗೊಂಡಿರದ ಈ ಕೃತಿಯು ಕನ್ನಡ ನಾಡಿನ ಸಾಹಿತ್ಯ-ರಂಗಭೂಮಿಗಳ ವಿದ್ವಾಂಸರಿಗೂ ವಿದ್ಯಾರ್ಥಿಗಳಿಗೂ ಉಪಯುಕ್ತವಾದೀತೆಂದು ಈ ಪ್ರಕಟಣೆ ನಂಬುತ್ತದೆ.





Reviews
There are no reviews yet.