ನಾಟ್ಯದರ್ಪಣ

Category: , , , ,

355.00

50 In Stock
Number of pages

206

Year of Publication

2026

Author

ಪ್ರೊ. ಎಂ.ಎ. ಹೆಗಡೆ ಮತ್ತು ವಿದ್ವಾನ್ ವಿಜಯಸಿಂಹ

50 in stock

Description

೧೨ನೆಯ ಶತಮಾನದ ಗುಜರಾತ್ ಪ್ರಾಂತ್ಯದಲ್ಲಿ ಬಾಳಿಬದುಕಿದ ರಾಮಚಂದ್ರ ಮತ್ತು ಗುಣಚಂದ್ರ ಎಂಬ ಜೈನ ಲೇಖಕರು ರಚಿಸಿದ ನಾಟಕ ಮೀಮಾಂಸೆ ಕುರಿತ ಗ್ರಂಥ ‘ನಾಟ್ಯದರ್ಪಣ’. ನಾಲ್ಕು ವಿವೇಕ – ಅಥವಾ ಅಧ್ಯಾಯ – ಗಳಲ್ಲಿ ವಿಭಜಿತವಾದ ಈ ಕೃತಿಯು ಸೂತ್ರ/ಕಾರಿಕೆಗಳ ರೂಪದಲ್ಲಿದೆ. ಭಾರತದ ರಂಗಸಂಪ್ರದಾಯಗಳ ಆದಿಮಗ್ರಂಥವಾಗಿರುವ ಭರತಮುನಿಯ ‘ನಾಟ್ಯಶಾಸ್ತ್ರ’ವನ್ನೇ ಅನುಸರಿಸಿ ಸಾಗುವ ಈ ಕೃತಿಯು ತನಗಿಂತ ತುಸು ಮೊದಲು ರಚಿತವಾದ ಇನ್ನೊಂದು ಪ್ರಸಿದ್ಧ ಮೀಮಾಂಸಾ ಕೃತಿ ಧನಂಜಯನ ‘ದಶರೂಪಕ’ವನ್ನೂ ಹೋಲುತ್ತದೆ. ಮಾತ್ರವಲ್ಲ, ಕೆಲವು ವಿದ್ವಾಂಸರ ಪ್ರಕಾರ, ಅದು ‘ದಶರೂಪಕ’ವನ್ನು ಮೀರಿಸಬೇಕೆಂಬ ಪೈಪೋಟಿಯಲ್ಲಿ ರಚಿತವಾಗಿರುವಂತೆಯೂ ತೋರುತ್ತದೆ. ಮುಖ್ಯವಾಗಿ ರಸಸ್ವರೂಪವನ್ನು ವಿವರಿಸುವಲ್ಲಿ ಈ ಕೃತಿಯು ಹಿಂದಿನ ಗ್ರಂಥಗಳಿಗಿಂತ ತುಸು ಭಿನ್ನ ನಿಲುವನ್ನು ತಾಳುತ್ತದೆಯೆಂದೂ ಅಧ್ಯಯನಕಾರರು ಗುರುತಿಸಿದ್ದಾರೆ. ಇದುವರೆಗೂ ಕನ್ನಡಕ್ಕೆ ಅನುವಾದಗೊಂಡಿರದ ಈ ಕೃತಿಯು ಕನ್ನಡ ನಾಡಿನ ಸಾಹಿತ್ಯ-ರಂಗಭೂಮಿಗಳ ವಿದ್ವಾಂಸರಿಗೂ ವಿದ್ಯಾರ್ಥಿಗಳಿಗೂ ಉಪಯುಕ್ತವಾದೀತೆಂದು ಈ ಪ್ರಕಟಣೆ ನಂಬುತ್ತದೆ.

Reviews

There are no reviews yet.

Be the first to review “ನಾಟ್ಯದರ್ಪಣ”

Your email address will not be published. Required fields are marked *