ಬೇಟೆಯಲ್ಲ, ಆಟವೆಲ್ಲ

SKU: 207
Category: , , , ,

180.00

27 In Stock
Weight 0.00000000 g
Number of pages

176

Year of Publication

2020

Author

ಎಂ.ಎಸ್. ಶ್ರೀರಾಮ್

eBook

https://play.google.com/store/books/details/M_S_Sriram_Beteyalla_Aatavella?id=LFkGEAAAQBAJ

27 in stock

Description

ಕಾರ್ಪೊರೇಟ್ ಪ್ರಪಂಚದ ಗೆರಿಲ್ಲಾ ಕದನದಂತಿರುವ ‘ಬೇಟೆಯಲ್ಲ, ಆಟವೆಲ್ಲ’ ಕೇವಲ ರೋಚಕ ಕತೆಯಷ್ಟೆ ಅಲ್ಲ. ಇದು – ತಲೆಮಾರುಗಳ ಘರ್ಷಣೆಯಂತೆ ತೋರುತ್ತಲೇ, ಒಂದೇ ತಲೆಮಾರಿನೊಳಗೆ ಹುದುಗಿರುವ ವಿಭಿನ್ನ ಮನೋಧರ್ಮಗಳ ತುಮುಲಗಳು ಒಂದರ ಮೇಲೊಂದು ಸವಾರಿ ಮಾಡುತ್ತ, ಒಂದಕ್ಕೊಂದು ಹೆಣಿಗೆ ಹಾಕಿಕೊಳ್ಳುತ್ತ ತಲೆಮಾರುಗಳ ನಡುವಿನ ಗೆರೆಯನ್ನು ಸ್ವಲ್ಪ ಸ್ವಲ್ಪವೇ ಮಸುಕಾಗಿಸುವ ಕತೆ. ವ್ಯಾಪಾರೋದ್ಯಮದ ನವಸಂಸ್ಕೃತಿಯು ಧರ್ಮ, ರಾಜಕೀಯ, ಪ್ರೇಮ, ನೈತಿಕತೆಯನ್ನು ವಶಪಡಿಸಿಕೊಂಡು ಹೇಗೆ ಅವುಗಳನ್ನು ಮರುವ್ಯಾಖ್ಯಾನಿಸಿದೆ, ಇಂದಿನ ರಾಜಕೀಯ ಸನ್ನಿವೇಶವು ನಮ್ಮೊಳಗೆ ಹೊಸ ಬಗೆಯ ಪೂರ್ವಾಗ್ರಹಗಳನ್ನು ಹೇಗೆ ತುಂಬಿಸುತ್ತಿದೆ ಅನ್ನುವುದನ್ನು ನಿರೂಪಿಸುವ ಕತೆ. ಜೀವನ ನಿರ್ವಹಣೆಗೆ ಆಧುನಿಕತೆಯ ಲಗಾಮು ಹಿಡಿದು, ಜೀವನ ವಿಧಾನದಲ್ಲಿ ಧಾರ್ಮಿಕ ನಂಬಿಕೆಯ ಪೋಷಾಕುಗಳಿಗೆ ಮೊರೆಹೋಗುವ ಅಖ್ತರ್ ಒಂದು ತುದಿಯಲ್ಲಿ. ಧಾರ್ಮಿಕ ಸ್ಥಂಬಗಳನ್ನು ಒಡೆದು ಆಧುನಿಕ ಚಿಂತನದ ಪೋಷಾಕು ಧರಿಸಿರುವ ಅನಿರುದ್ಧ ಇನ್ನೊಂದು ತುದಿ. ಅಪ್ಪಟ ವ್ಯಾಪಾರೀ ಮನೋಧರ್ಮದ ಶಿವಾನಿ ಮತ್ತೊಂದೇ ತುದಿ. ಈ ತ್ರಿಕೋಣದ ನಡುವೆ ಸುಜಾತ ಮೂರೂ ಬಿಂದುಗಳನ್ನು ಎಂದೂ ಮುಟ್ಟಲಾಗದ ಒಳವರ್ತುಲವಾದರೆ, ಚಿನ್ಮಯ ಆ ಬಿಂದುಗಳ ಬೆಸೆಯುವ ಗೆರೆಗಳನ್ನು ಎಂದೂ ಮುಟ್ಟಲಾಗದ ಹೊರವರ್ತುಲ. ಇಂಥ ಪಾತ್ರಗಳ ಜಂಜಾಟಗಳೇ ಈ ಕಾಲದ ಜಟಿಲತೆಯನ್ನು ನನ್ನ ಮನಸ್ಸಿನ ಮೇಲೆ ಗಾಢವಾಗಿ ಅಚ್ಚೊತ್ತಿದೆ. ಶಿವಾನಿಯ ಪಾತ್ರ ಕನ್ನಡ ಜಗತ್ತಿನಲ್ಲಿ ಹೊಸತೊಂದು ಚರ್ಚೆಯನ್ನು ಹುಟ್ಟುಹಾಕವಷ್ಟು ಗರಿಗರಿಯಾಗಿದೆ. ಕತೆಗಾರ ಪಾತ್ರಗಳ ಜಗತ್ತನ್ನು ಆಕ್ರಮಿಸದಿದ್ದಾಗ ಆ ಪಾತ್ರ ಎಷ್ಟು ಪ್ರಖರವಾಗಿ ನಿಲ್ಲಬಹುದು ಅನ್ನುವುದಕ್ಕೊಂದು ಉದಾಹರಣೆ – ಶಿವಾನಿ. ಅರ್ಬನ್ ಜಗತ್ತಿನ ತಾಜಾ ಅನಾವರಣ ಇಲ್ಲೊಂದು ವಿಶಿಷ್ಟ ಮಾಹೊಲ್ ನಿರ್ಮಿಸಿದೆ. ಹಳೆಯ ರೂಪಕದಂತಿರುವ ಮಾಯಾಬಜಾರಿನಲ್ಲಿ ಹೊಸ ವ್ಯಾಪಾರೀ ಮಳಿಗೆಗಳ ಗಾಜುಗೋಡೆಗಳ ಮೇಲೆ ನಮ್ಮೆಲ್ಲರ ಆಚೆ‌ಈಚಿನದನ್ನು ಒಟ್ಟಿಗೇ ಕಾಣಿಸುವ ಕಲಸುಮೇಲೋಗರದಂಥ ಪ್ರತಿಫಲನವಿದೆ.

– ವಿಕ್ರಂ ಹತ್ವಾರ್

Reviews

There are no reviews yet.

Be the first to review “ಬೇಟೆಯಲ್ಲ, ಆಟವೆಲ್ಲ”

Your email address will not be published. Required fields are marked *

M.S. Sriram

ಎಂ ಎಸ್ ಶ್ರೀರಾಮ್ ಹುಟ್ಟಿದ್ದು ೧೯೬೨ರಲ್ಲಿ, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ. ಉಡುಪಿ, ಬೆಂಗಳೂರು, ಮೈಸೂರು, ಆಣಂದದಲ್ಲಿ ವ್ಯಾಸಂಗ. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿ, ನಂತರ ಬೆಂಗಳೂರಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಿಂದ ಡಾಕ್ಟರೇಟ್ ಪಡೆದ ಮೇಲೆ ಆಣಂದದ ಇನ್ಸ್‌ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟಿನಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನಲ್ಲಿ ಪ್ರೊಫೆಸರ್ ಕೆಲಸ ನಿರ್ವಹಿಸಿದ್ದಾರೆ. ಈಗ ಬೆಂಗಳೂರಿನ ಐಐಎಂನಲ್ಲಿ ಪ್ರಾಧ್ಯಾಪಕರಾಗಿ, ಸಾರ್ವಜನಿಕ ನೀತಿ ಕೇಂದ್ರದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮ್ ಅವರ ಸಲ್ಮಾನ್ ಖಾನನ ಡಿಫಿಕಲ್ಟೀಸು (ಅಂಕಿತ ಪುಸ್ತಕ) ಕಥಾಸಂಗ್ರಹಕ್ಕೆ ೨೦೧೪ರ ಮತ್ತು ಅರ್ಥಾರ್ಥ (ಅಕ್ಷರ ಪ್ರಕಾಶನ) ಪ್ರಬಂಧಗಳ ಸಂಗ್ರಹಕ್ಕೆ ೨೦೧೫ರ ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ. ಇದಲ್ಲದೇ ಅವರವರ ಸತ್ಯ (ಸಪ್ನ ಬುಕ್ ಹೌಸ್), ತೇಲ್ ಮಾಲಿಶ್ (ಅಂಕಿತ ಪುಸ್ತಕ), ನಡೆಯಲಾರದ ದೂರ, ಹಿಡಿಯಲಾಗದ ಬಸ್ಸು (ಆಕೃತಿ ಪ್ರಕಾಶನ), ನಾನು ನಾನೇ? ನಾನು ನಾನೇ! (ಮನೋಹರ ಗ್ರಂಥಮಾಲಾ) ಎಂಬ ಕತೆಗಳ ಸಂಕಲನಗಳು, ಬೇಟೆಯಲ್ಲ ಆಟವೆಲ್ಲ ಎಂಬ ಕತಾ-ಕಾದಂಬರಿ (ಅಕ್ಷರ ಪ್ರಕಾಶನ), ಕನಸು ಕಟ್ಟುವ ಕಾಲ (ವಸಂತ ಪ್ರಕಾಶನ), ಶನಿವಾರ ಸಂತೆ (ಅಂಕಿತ ಪುಸ್ತಕ), ಕಥನ ಕುತೂಹಲ (ಅಕ್ಷರ ಪ್ರಕಾಶನ) ಎಂಬ ಪ್ರಬಂಧ ಸಂಕಲನಗಳು, ವೈ ವಿ ರೆಡ್ಡಿಯವರ ಜೀವನದ ಬಗ್ಗೆ ಬಂದ ಪುಸ್ತಕಗಳನ್ನಾಧರಿಸಿ ಬರೆದ ಭಿನ್ನ-ಅಭಿಪ್ರಾಯ (ಅಕ್ಷರ ಪ್ರಕಾಶನ) ಎನ್ನುವ ನಿರೂಪಣೆಯನ್ನೂ ಸೇರಿಸಿ, ಶ್ರೀರಾಮ್ ಒಟ್ಟು ಹನ್ನೆರಡು ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಾಯಾದರ್ಪಣ ಅವರು ಬರೆದ ಕತೆಗಳ ಮೊದಲ ಸಂಕಲನ. ಇದಕ್ಕೆ ಮಾಸ್ತಿ ಕನ್ನಡ ಸೇವಾನಿಧಿ ಪ್ರಶಸ್ತಿ ದೊರೆತಿದೆ.

More By The Author