Description
ಈ ಜೀವನಚರಿತ್ರೆಯು ಆರಂಭವಾಗುವುದೇ ವಿಚಿತ್ರವಾದ ಒಂದು ಧರ್ಮಸಂಕಟದಿಂದ. ಈ ಕಥನದ ಮುಖ್ಯಪಾತ್ರವಾದ ರಾಣೀ ನರಸಿಂಹ ಶಾಸ್ತ್ರಿಯವರು, ಇದೇ ೨೦೦೧ಕ್ಕೆ ಎಂಬತ್ತು ವರ್ಷ ತುಂಬಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ; ಆದರೆ ಅನಾರೋಗ್ಯಕ್ಕೂ ಮಿಗಿಲಾದ ಚಿಂತೆಯೊಂದು ಅವರನ್ನು ಬಾಧಿಸತೊಡಗಿದೆ- ಅವರ ಅಂತ್ಯಸಂಸ್ಕಾರಗಳನ್ನು ನಡೆಸಲು ಸಾಂಪ್ರದಾಯಿಕವಾಗಿ ಅರ್ಹತೆಯುಳ್ಳ ಉತ್ತರಾಧಿಕಾರಿಯೊಬ್ಬ ಅವರಿಗಿನ್ನೂ ಸಿಕ್ಕಿಲ್ಲ. ಹಾಗಂತ, ಅವರಿಗೆ ಇಬ್ಬರು ಮಕ್ಕಳಿದ್ದಾರೆ- ಆದರೆ, ಅವರಲ್ಲೊಬ್ಬ ನಾಸ್ತಿಕನಾಗಿ ಎಡಪಂಥೀಯ ವಿಚಾರದ ಪ್ರಭಾವಕ್ಕೊಳಗಾಗಿ ಸಂಪ್ರದಾಯವನ್ನು ತೊರೆದಿದ್ದಾನೆ. ಇನ್ನೊಬ್ಬ ಮಗ, ‘ಬ್ರಾಹ್ಮಣ ಸಂಪ್ರದಾಯ’ವನ್ನು ತೊರೆದು ‘ಹಿಂದೂಧರ್ಮ’ಕ್ಕೆ ಪರಿವರ್ತಿತನಾಗಿ ಹಿಂದುತ್ವವಾದಿ ಸಂಘಟನೆಗಳೊಂದಿಗೆ ಕೂಡಿಕೊಂಡಿದ್ದಾನೆ. ತಮ್ಮ ಇಡಿಯ ಬದುಕನ್ನು ತಾವು ನಂಬಿದ ‘ಆರ್ಷೇಯ ಪರಂಪರೆ’ಯ ಮಾರ್ಗದಲ್ಲಿ ಬದುಕಿರುವ ಶಾಸ್ತ್ರಿಗಳಿಗೆ ಈ ಇಬ್ಬರು ಮಕ್ಕಳೂ ಈಗ ‘ಮತಾಂತರ’ಗೊಂಡವರಾಗಿ ಕಾಣುತ್ತಿದ್ದಾರೆ. ಇದು ಈ ಧರ್ಮಸಂಕಟಕ್ಕೆ ಮೂಲ. ಇಂಥ ವಿಚಿತ್ರ ಸಮಸ್ಯೆಯಿಂದ ಮೊದಲುಗೊಳ್ಳುವ ಈ ಪುಸ್ತಕವು ಮುಂದೆ ನರಸಿಂಹಶಾಸ್ತ್ರಿಗಳ ಬದುಕು, ನಂಬಿಕೆ ಮತ್ತು ದರ್ಶನಗಳ ಒಂದು ಲೋಕವನ್ನೇ ನಮ್ಮೆದುರಿಗೆ ಬಿಚ್ಚುತ್ತಹೋಗುತ್ತದೆ…
Reviews
There are no reviews yet.