Description
ಮಾಸ್ತಿ, ಡಿ.ವಿ.ಜಿ., ಮೂರ್ತಿರಾವ್, ಅಡಿಗ ಅವರಿಂದ ಆರಂಭಿಸಿ, ಗಿರಡ್ಡಿ ಗೋವಿಂದರಾಜ ಮತ್ತು ಕೆ.ವಿ. ತಿರುಮಲೇಶ್ ಅವರವರೆಗೆ ಕನ್ನಡಸಾಹಿತ್ಯದ ಹಲವು ಅತಿರಥರನ್ನು ಕುರಿತ ಬರಹಗಳು ಇಲ್ಲಿವೆ. ಮುಖ್ಯವಾಗಿ, ವಿಮರ್ಶೆಯ ಬರಹಗಳನ್ನು ಕೇಂದ್ರವಾಗಿಟ್ಟುಕೊಂಡು ಆಮೂಲಕ, ಸಾಹಿತ್ಯದ ಚರ್ಚೆ ಮತ್ತು ಅವಲೋಕನ ನಡೆಯುವ ಬಗೆಯನ್ನು ಇಲ್ಲಿನ ಲೇಖನಗಳು ಸರಳವಾಗಿ ಉದಾಹರಣೆಗಳ ಸಮೇತ, ಓದುಗರಿಗೆ ಮನದಟ್ಟು ಮಾಡುವಂತಿವೆ. ಜತೆಗೆ, ಕನ್ನಡ ವಿಮರ್ಶೆಯ ಹಲವು ಕಾಲ-ಶೈಲಿಗಳ ಕೆಲವು ಪ್ರಮುಖ ದೃಷ್ಟಾಂತಗಳನ್ನು ಬಿಡಿಯಾಗಿ ಹಾಗೂ ಪರಸ್ಪರ ಸಂಬಂಧದಲ್ಲಿ ನೋಡುವ ಮೂಲಕ ಆಧುನಿಕ ಕಾಲದ ಕನ್ನಡವಿಮರ್ಶೆಯ ಕ್ಷೇತ್ರದಲ್ಲೇ ನಿರ್ಮಾಣವಾಗುವ ಪುಟ್ಟ ವಿನ್ಯಾಸವೊಂದನ್ನು ಈ ಪುಸ್ತಕವು ಅನಾವರಣಗೊಳಿಸುವ ಪ್ರಯತ್ನ-ಪ್ರಯೋಗದಲ್ಲಿ ತೊಡಗಿಕೊಂಡಿದೆ.
Reviews
There are no reviews yet.