Description
ಖಂಡಕಾವ್ಯ ಗ.ಸು. ಭಟ್ಟರಿಗೆ ಇಷ್ಟವಾದ, ಇವರಿಗೆ ಕರತಲಾಮಲಕವಾದ ಕಾವ್ಯ ಪ್ರಕಾರ… ಈ ಕಥನಕವನದ ‘ಹುಳು’ಬಾಣಭಟ್ಟನ ಕಾದಂಬರಿಯ ಗಿಳಿಯ ಹಾಗೆ ಸೊಗಸಾಗಿ ಕತೆಯನ್ನು ನಿರೂಪಿಸುತ್ತದೆ.
-ಡಾ| ಮುರಳೀಧರ ಉಪಾಧ್ಯ (ಮುನ್ನುಡಿಯಿಂದ)
ಈ ನೀಳ್ಗವಿತೆ ಒಂದು ಕಥನಕಾವ್ಯ… ಇಲ್ಲಿಯ ಕಥೆಯಲ್ಲಿ ಮುಗ್ಧತೆ ಮತ್ತು ವಾಸ್ತವದ ನಿರಂತರ ಒಡನಾಟ ಮತ್ತು ಸಂಘರ್ಷದ ಚಿತ್ರಣವಿದೆ.
-ಡಾ| ಚಿಂತಾಮಣಿ ಕೊಡ್ಲೆಕೆರೆ (ಮುನ್ನುಡಿಯಿಂದ)
ಪದಲಾಲಿತ್ಯ ಹಾಗೂ ಛಂದೋವಿನ್ಯಾಸಗಳನ್ನು ಒಳಗೊಂಡ ದೀರ್ಘ ಕಥನಕವನಗಳನ್ನು ಎಕ್ಕುಂಡಿಯವರ ನಂತರ ನಾವು ಕಾಣುವುದು ಗ.ಸು. ಭಟ್ಟರಲ್ಲಿಯೇ.
-ಡಾ| ಸಿ.ಎನ್. ರಾಮಚಂದ್ರನ್
ಕನ್ನಡದಲ್ಲಿ ಕಥನಕಾವ್ಯದ ಕಥೆ ಮುಗಿಯಿತು ಎನ್ನುವಾಗ ಆ ಬಗೆಯ ರಚನೆಗಳನ್ನು ಮಾಡಿ ಸಹೃದಯದ ಗಮನ ಸೆಳೆದ ಕವಿ ಗ.ಸು. ಭಟ್ಟರು.
-ಡಾ| ಎಚ್.ಎಸ್. ವೆಂಕಟೇಶಮೂರ್ತಿ
ಭಟ್ಟರ ರಚನೆಗಳು ನಮ್ಮ ಕಾಲದ ಕನ್ನಡ ಸಾಹಿತ್ಯದ ವೈವಿಧ್ಯ ಮತ್ತು ಶ್ರೀಮಂತಿಕೆಗಳ ಹೆಚ್ಚಳಕ್ಕೆ ತಮ್ಮದೇ ಕಾಣಿಕೆ ನೀಡಿವೆ.
-ಪ್ರೊ| ಓ.ಎಲ್. ನಾಗಭೂಷಣಸ್ವಾಮಿ
Reviews
There are no reviews yet.